ಬುಧವಾರ, ಜೂನ್ 10, 2015

ಮನಸ್ಸು... ಭಾವಗೀತೆ


ಮನಸ್ಸು

ಈ ಮನಸ ಮುದುಡಿ ಮಣ್ಣಾಗ ಇಟ್ಟು
ಗೋರೀಯ ಕಟ್ಟಲೇನ..|
ಕನಸೊಳಗ ಬಂದು ದಿನ ಕಾಡತೈತಿ
ಕಣ್ಮುಚ್ಚಿ ಕೂಡಲೇನ..||

ಬೇಕೆಂದರಲ್ಲಿ ಓಡಾಡತೈತಿ
ಕಡಿವಾಣವಿಲ್ಲ ಇದಕ..|
ಅಡ್ಡಾಡಿ ಬರಲಿ ಸಾಕಾಗೋ ತನಕ
ಬರತೈತಿ ತಾನ ಸುಮಕ..||

ಹಗ್ಗಾನ ಬಿಗಿದು ಗೂಟಕ್ಕ ಕಟ್ಟಿ
ಕೂಳಿಲ್ದ ನೂಕಲೇನ..|
ಹೋದ್ಹೋದ ಕಡಿಗೆ ಬರತೈತಿ ಮತ್ತ
ಇರಲಿಲ್ಲ ನಾಚಿಕೇನ..||

ತನ್ನೊಳಗ ಏನss ನಗೆಯಾಡತೈತಿ
ಹಿಡದೈತಿ ಇದಕ ಹುಚ್ಚ..|
ಈ ಹುಚ್ಚು ಮುಂದ ಹೆಚ್ಚಾಗದ್ಹಂಗ
ಇಡಬೇಕ ಇದಕ ಕಿಚ್ಚ..||
       
             - ಡಾ.ರಾಜಶೇಖರ.ಚಂ ಡೊಂಬರಮತ್ತೂರ